Tuesday, August 30, 2011




ಮಹಾಮಾತೆ ಗೌರಿ
ಭಕ್ತರು ಕರೆದಿಹರು ನಿನ್ನ
ಮನಒಲಿದು ಬಂದರೆ ಚೆನ್ನ
ನಗುತಲಿ ಬಾಮ್ಮ ಪರಮೇಶ್ವರಿ

ನಿನಗಾರು ಸಾಟಿ ಹೇ ಶಂಕರಿ
ಮಂದಹಾಸವ ಎಲ್ಲೆಲ್ಲೂ ಬೀರಮ್ಮ
ಸರ್ವರಿಗೂ ಸುಖಃಶಾಂತಿ ನೀಡಮ್ಮ
ಬಾರಮ್ಮ ನಿನ್ನೊಮ್ಮೆ ಮಾಹೇಶ್ವರಿ

ಸಕಲವು ತಿಳಿದಿರುವ ಸರ್ವೇಶ್ವರಿ
ನನ್ನ ಬದುಕು ಮುಗಿಯುವ ಮುನ್ನ
ಒಮ್ಮೆಬಂದು ಸಲಹಮ್ಮ ನನ್ನ
ಪೂಜೀಪೆನು ನಿನ್ನ ದೇವೀಶ್ವರಿ

ಜಗದಂಬ ನೀ ಜಗದೀಶ್ವರಿ
ಭಕ್ತಿಯ ಪೂಜೆಗೊಲಿದು ಬಾರಮ್ಮ
ಭಕ್ತರಿಗೆ ಮುಕ್ತಿಯ ನೀಡಮ್ಮ
ಪರ್ವತೇಶ್ವರಿ ಶ್ರೀ ಚಾಮುಂಡೇಶ್ವರಿ


ನಿಶಾಂತ್ .


No comments:

Post a Comment