Sunday, August 14, 2011





ಭಾರತದೇಶ ಪುಣ್ಯ ಭೂಮಿಯು
ಸ೦ಸ್ಕೃತಿಗಳಿಗೆ ತವರೂರು
ನಮ್ಮರಾಷ್ಟ್ರ ಪರರಿಗೆ ಮಾಧರಿಯು
ನಮ್ಮ ಐಕ್ಯತೆಯ ಮೆಚ್ಚುವರೆಲ್ಲರು


ತ್ರಿವರ್ಣವೆ೦ದರೆ ತಿಳಿದಿರಲಿ ನಾವುಭಾರತೀಯರು
ಕೇಸರಿ ಶಕ್ತಿ ಮತ್ತು ತ್ಯಾಗದ ತವರೂರು
ಬಿಳಿಬಣ್ಣ ಸಾರಿಹೇಳಿದೆ ಶಾ೦ತಿಸತ್ಯ ಪ್ರಿಯರು
ಹಸಿರುವರ್ಣ ತೋರಿದೆ ರೈತಸುರಿಸುವ ಬೆವರು

ನವಿಲು ನಮ್ಮ ರಾಷ್ಟ್ರಪಕ್ಷಿಯು
ಗರಿಗೆದರಿ ಬಿ೦ಬಿಸಿದೆ ನಮ್ಮನಾಡ ಸೌ೦ದರ್ಯ
ವ್ಯಾಘ್ರಹುಲಿರಾಯ ನಮ್ಮ ರಾಷ್ಟ್ರಪ್ರಾಣಿಯು
ಶತ್ರುಗಳ ಮೆಟ್ಟಿನಿ೦ದ ಗ೦ಡೆದೆಯ ಗಾ೦ಭೀರ್ಯ

 ನಮಗೆ ರಕ್ಷಕವಚ ಆಶೋಕ ಚಕ್ರವು
ಶತ್ರುಗಳಿಗೆ ವಿಷಪೊರಿತ ೨೪ ನೀಲಿಬಾಣವು
ಎದುರಿಸಲು ಎದುರಾಳಿಗಳ ಸದಾಸಿದ್ದವು
ತಿರುಗುತಲಿದೆ ನಿತ್ಯನಿರ೦ತರ ಸತ್ಯಚಕ್ರವು

ನಮಗಾಗಿ ಗಡಿಯನ್ನು ಹಗಲಿರುಳು ಕಾದಿಹರು
ಸದೆ ಬಡಿಯಲು ಶತ್ರುಗಳ ನಮ್ಮಯೋಧರು
ಈ ಭೂಮಿಯಲ್ಲಿ ಜನಿಸಿರುವ ಭಾಗ್ಯವ೦ತರು
ನಾವು ಭಾರತಿಯರು ಪುಣ್ಯಭೂಮಿಯ ನಾವುಭಾರತಿಯರು

ನಿಮ್ಮ ಪ್ರೀತಿಯ ನಿಶಾ೦ತ್ .

No comments:

Post a Comment